ಉಡುಪಿ ’ಶ್ರೀಕೃಷ್ಣ ಮಠದಲ್ಲಿ ಅಷ್ಟಮಂಗಳ ಪ್ರಶ್ನೆ’: ಕಾಳಸರ್ಪ ದೋಷ, ಸಂಕಷ್ಟ ನಿವಾರಣೆಗಾಗಿ 18 ಕೋಟಿ ರಾಮ ಮಂತ್ರ ಹಾಗೂ 1 ಕೋಟಿ ಕೃಷ್ಣ ಮಂತ್ರ ಜಪ.
ಉಡುಪಿ ಶ್ರೀ ಕೃಷ್ಣ ಮಠದ ಅಷ್ಟಮಂಗಲ ಪ್ರಶ್ನೆಯಲ್ಲಿ, ಕಾಳಸರ್ಪ ಯೋಗದಿಂದಾಗಿ ಡಿಸೆಂಬರ್ ಒಳಗೆ ಜಗತ್ತಿಗೆ ಭೀಕರ ಗಂಡಾಂತರ ಎದುರಾಗಲಿದೆ ಎಂಬ ದೈವಿಕ ಮುನ್ಸೂಚನೆ ವ್ಯಕ್ತವಾಗಿದೆ. ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ 18 ಕೋಟಿ ರಾಮ ಮಂತ್ರ ಹಾಗೂ 1 ಕೋಟಿ ಕೃಷ್ಣ ಮಂತ್ರ ಜಪ ಸೇರಿದಂತೆ ಬೃಹತ್ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಉಡುಪಿ ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚೆಗೆ ಮಠದ ಆಡಳಿತ ಮತ್ತು ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ನಡೆಸಲಾದ ‘ಅಷ್ಟಮಂಗಲ ಪ್ರಶ್ನೆ’ಯ ಚಿಂತನೆಯಲ್ಲಿ ಇಡೀ ದೇಶ ಹಾಗೂ ಪ್ರಪಂಚಕ್ಕೇ ಕಾಳಸರ್ಪ ಯೋಗದ ಭೀಕರ ಗಂಡಾಂತರ ಕಾದಿದೆ ಎಂಬ ಆಘಾತಕಾರಿ ದೈವಿಕ ಮುನ್ಸೂಚನೆ ಬೆಳಕಿಗೆ ಬಂದಿದೆ.
ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ ಉಡುಪಿ ಕೃಷ್ಣ ಮಠ ಸೇರಿದಂತೆ ಲೋಕದ ಜನರು ಸೇರಿ ಅಂದರೆ ಕೃಷ್ಣ ಭಕ್ತರು ಸೇರಿ ಮಾಡಬೇಕು ಎನ್ನುವ ಉತ್ತರ ಬಂದಿದೆ. ಇಲ್ಲಿ ಇರುವ ಸಮಸ್ಯೆಗಳನ್ನು ನಾವು ಅಷ್ಟಮಠದವರು ಸೇರಿ ಪರಿಹಾರ ಮಾಡುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.
Discover more from BHAKTHI SANJEEVINI
Subscribe to get the latest posts sent to your email.



Leave a Reply